ಕನ್ನಡ ಜಾನಪದ ಬ್ಲಾಗ್ ಓದಲು ತೊಡಗಿದ್ದೇನೆ..
ಅರುಣ್,ನಿಮ್ಮ ಕನ್ನಡ ಜಾನಪದ ಬ್ಲಾಗ್ ಓದಲು ತೊಡಗಿದ್ದೇನೆ.ಒಳ್ಳೆಯ ಪ್ರಯತ್ನ.ಕನ್ನಡ ಜಾನಪದಕ್ಕೆ ಒಂದು ಬ್ಲಾಗ್ ಅಗತ್ಯ ಇತ್ತು.ಅಭಿನಂದನೆಗಳು.ತೊಗಲುಗೊಂಬೆ ಆಟದ ಕಲಾವಿದರ ಪರಿಚಯ ಚೆನ್ನಾಗಿದೆ.ಜೀ ಶಂ ಪ ಈ ಕ್ಷೇತ್ರದಲ್ಲಿ ಅದ್ಭುತ ಸಾಧನೆ ಮಾಡಿದವರು.ಪಿ ಅರ.ತಿಪ್ಪೇಸ್ವಾಮಿ ಮೈಸೂರು ಮ್ಯೂಸಿಯಂ ನಲ್ಲಿ ತೊಗಲು ಗೊಂಬೆಗಳ ಸಂಗ್ರಹದ ಪರಿಶ್ರಮ ಪಟ್ಟವರು.ಜಾನಪದ ವಿವಿ ಆಗಿರುವ ಈ ಹೊತ್ತಿನಲ್ಲಿ ಇವರ ನೆನಪೇ ನಮಗೆ ದೀಪಾವಳಿ
ಪ್ರಿಯ ವಿವೇಕ ರೈ ಅವರಿಗೆ:
ಕನ್ನಡ ಜಾನಪದ ಬ್ಲಾಗ್ ಬಗ್ಗೆ ನಿಮ್ಮ ಉತ್ಸಾಹಪೂರ್ಣ ಪ್ರತಿಕ್ರಿಯೆ ಓದಿ ಸಂತೋಷವಾಯಿತು; ಕನ್ನಡ ಜಾನಪದ ಲೋಕ ಎಷ್ಟು ವಿಶಾಲವಾಗಿದೆಯೆಂದರೆ ಅದರ ಬಗ್ಗೆ ಎಷ್ಟು ಬ್ಲಾಗ್ಗಳಿದ್ದರೂ ಸಾಲದು; ಇದು ಕನ್ನಡಿಗರೆಲ್ಲರಿಗೂ ಸಂತೋಷದ ಸಂಗತಿ.
ನಾನೂ ಕನ್ನಡ ಜಾನಪದ ಮಹಾಕಾವ್ಯಗಳ ಬಗ್ಗೆ (ಹಾಗೂ ಸಂಬಂಧಿಸಿದ ಕನ್ನಡ ಸಾಹಿತ್ಯದ ಬಗ್ಗೆ) ಇಂಗ್ಲೀಷಿನಲ್ಲಿ ಕಳೆದೆರಡು ವರ್ಷಗಳಿಂದ ಒಂದು ಬ್ಲಾಗ್ ಬರೆಯುತ್ತಿದ್ದೇನೆ:drcnr.blogspot.com. ಸಮಯವಾದಾಗ ಅದನ್ನೂ ಓದಿದರೆ (ಹಾಗೂ ನಿಮ್ಮ ಮಿತ್ರರ ಗಮನಕ್ಕೆ ತಂದರೆ) ಸಂತೋಷವಾಗುತ್ತದೆ. ಅದರಲ್ಲಿರುವ ಲೇಖನಗಳ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಯಲು ಕುತೂಹಲವಿದೆ.
ರಾಮಚಂದ್ರನ್
C. N. Ramachandran
ನವೆಂಬರ್ 7, 2010